ಕೋವಿಡ್ ಪ್ರತಿರೋಧ : ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ

 ಕೋವಿಡ್ ಪ್ರತಿರೋಧ : ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ

ಕಾಸರಗೋಡು, ಆ.9 : ಕೋವಿಡ್ 19 ಸೋಂಕು ಬಾಧೆ ನಿಯಂತ್ರಿಸುವ ನಿಟ್ಟಿನಲ್ಲಿ  ಮುಂದಿನ 14 ದಿನಗಳ ಕಾಲ ಯಾವುದೇ ಸಾರ್ವಜನಿಕ, ಖಾಸಗಿ ಸಮಾರಂಭಗಳಲ್ಲಿ ಸರಕಾರಿ ಸಿಬ್ಬಂದಿ ಮತ್ತು ಅವರ ಕುಟುಂಬದ ಸದಸ್ಯರು ಭಾಗವಹಿಸುವುದಿಲ್ಲ ಎಂಬ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ಕಾಸರಗೋಡು ಜಿಲ್ಲೆಯಲ್ಲಿ ಜರುಗಿತು.                          
                              ಗುರುವಾರ ಜಿಲ್ಲೆಯ ವಿವಿಧ ಸರಕಾರಿ ಕಚೇರಿಗಳಲ್ಲಿ ಈ ಕಾರ್ಯ ನಡೆಯಿತು. ಕಾಞಂಗಾಡ್ ಕಿರು ಸಿವಿಲ್ ಸ್ಟೇಷನ್ ನಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಪ್ರತಿಜ್ಞೆ ಪಠಿಸಿದರು. ಸಿಬ್ಬಂದಿ ಭಾಗವಹಿಸಿದರು. ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ನಡೆದ ಸಮಾರಂಭದಲ್ಲಿ ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಪ್ರತಿಜ್ಞೆ ಪಠಿಸಿದರು. ಸಿಬ್ಬಂದಿ ಪಾಲ್ಗೊಂಡರು.

Comments