ಕರ್ನಾಟಕ ಮೆಡಿಕಲ್ ಪ್ರವೇಶಾತಿ ಪರೀಕ್ಷೆ: ಪರೀಕ್ಷೆಗೆ ಹಾಕರಾಗುವವರಿಗೆ ಪ್ರತ್ಯೇಕ ಸಜ್ಜೀಕರಣ , ಮರಳಿದ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದ ಸದಸ್ಯರು 7 ದಿನಗಳ ಕಾಲ ರೂಂ ಕ್ವಾರೆಂಟೈನ್ ನಲ್ಲಿರಬೇಕು. ಇವರು 5ನೇ ದಿನ ಆಂಟಿಜೆನ್ ತಪಾಸಣೆಗೆ ಒಳಗಾಗಬೇಕು

ಕರ್ನಾಟಕ ಮೆಡಿಕಲ್ ಪ್ರವೇಶಾತಿ ಪರೀಕ್ಷೆ: ಪರೀಕ್ಷೆಗೆ ಹಾಕರಾಗುವವರಿಗೆ ಪ್ರತ್ಯೇಕ ಸಜ್ಜೀಕರಣ , ಮರಳಿದ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದ ಸದಸ್ಯರು 7 ದಿನಗಳ ಕಾಲ ರೂಂ ಕ್ವಾರೆಂಟೈನ್ ನಲ್ಲಿರಬೇಕು. ಇವರು 5ನೇ ದಿನ ಆಂಟಿಜೆನ್ ತಪಾಸಣೆಗೆ ಒಳಗಾಗಬೇಕು 
                                                       ಜು.30,31 ರಂದು ನಡೆಯಲಿರುವ ಕರ್ನಾಟಕ ಮೆಡಿಕಲ್ ಪ್ರವೇಶಾತಿ ಪರೀಕ್ಷೆಗೆ ಹಾಜರಾಗುವ ವಿದ್ಯಾಗಳಿಗೆ ಕಾಸರಗೋಡುಜಿಲ್ಲೆಯ ವಿವಿಧೆಡೆಗಳಿಂದ ತಲಪ್ಪಾಡಿ ವರೆಗೆ ತೆರಳಲು ಪ್ರತ್ಯೇಕ ಕೆ.ಎಸ್.ಆರ್.ಟಿ.ಸಿ. ಬಸ್ ಮಂಜೂರು ಮಾಡಲಾಗುವುದು. ಅಲ್ಲಿಂದ ಕರ್ನಾಟಕ ಸರಕಾರ ಸಜ್ಜುಗೊಳಿಸುವ ವಾಹನಗಳಲ್ಲಿ ಪರೀಕ್ಷಾ ಕೇಂದ್ರಗಳಿಗೆ ತೆರಳಬಹುದಾಗಿದೆ ಎಂದು ಜಿಲ್ಲಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. 
                               ಇವರು ಬೇರೆ ಸಾರ್ವಜನಿಕ ಸಂಚಾರ ವ್ಯವಸ್ಥೆಗಳನ್ನು ಬಳಸಕೂಡದು. ಪರೀಕ್ಷೆ ಮುಗಿಸಿ ಮರಳಿದ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದ ಸದಸ್ಯರು 7 ದಿನಗಳ ಕಾಲ ರೂಂ ಕ್ವಾರೆಂಟೈನ್ ನಲ್ಲಿರಬೇಕು. ಇವರು 5ನೇ ದಿನ ಆಂಟಿಜೆನ್ ತಪಾಸಣೆಗೆ ಒಳಗಾಗಬೇಕು ಎಂದವರು ನುಡಿದರು. 

Comments